ಗುರುವಾರ, ಫೆಬ್ರವರಿ 3, 2011

ಸಾಹಿತ್ಯ ಸಮ್ಮೇಳನ : ಶಾಲೆಗಳಿಗೆ ಎರಡು ದಿನ ರಜೆ

ಬೆಂಗಳೂರು, ಫೆ. 2 : ನಗರದಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಅನುದಾನಿತ ಮತ್ತು ಅನುದಾನರಹಿತ ಬೆಂಗಳೂರಿನ ಶಾಲೆಗಳಿಗೆ ಫೆಬ್ರವರಿ 4 ಮತ್ತು 5 ರಂದು ರಜೆ ಘೋಷಿಸಲಾಗಿದೆ.

ನಗರ ವ್ಯಾಪ್ತಿಯಲ್ಲಿರುವ ಎಲ್ಲ ಶಾಲಾಮಕ್ಕಳು ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾಗಲು ಈ ರಜೆ ನೀಡಲಾಗಿದೆ. ಬೋಧಕವರ್ಗ ಮತ್ತು ಇತರೆ ಸಿಬ್ಬಂದಿ ಸಹ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು ಎಂದು ಗೃಹ ಸಚಿವ ಆರ್. ಅಶೋಕ್ ಅವರು ಬುಧವಾರ ತಿಳಿಸಿದ್ದಾರೆ.

ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ 41 ವರ್ಷಗಳ ಬಳಿಕ ರಾಜ್ಯ ರಾಜಧಾನಿಯಲ್ಲಿ ಪ್ರತಿಷ್ಠಿತ ಸಮ್ಮೇಳನವು ವಿಜೃಂಭಣೆಯಿಂದ ನಡೆಯಲಿದೆ.