ಮಂಗಳವಾರ, ಸೆಪ್ಟೆಂಬರ್ 28, 2010

ಬೆ೦ಗಳೂರು : 77ನೇ ಅಖಿಲ ಭಾರತ ಸಾಹಿತ್ಯ ಜಾತ್ರೆಯ ಅಧ್ಯಕ್ಷ ಗಾದಿಗೆ ಯಾರು?

ಪ್ರಕಟಿಸಿದ ದಿನಾಂಕ : 2010-09-05

ಬೆಂಗಳೂರು: ಡಿಸೆಂಬರ್‌ನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟಕ್ಕಾಗಿ ಸಾಹಿತಿಗಳ ತಾಲೀಮು ಶುರುವಾಗಿದೆ.
ಈ ಹಿಂದಿನ ಹಲವು ಸಾಹಿತ್ಯ ಸಮ್ಮೇಳನಗಳ ಸಮ್ಮೇಳನಾಧ್ಯಕ್ಷರ ಅಂತಿಮ ಹಂತದ ಆಯ್ಕೆ ಪಟ್ಟಿಯ ಲ್ಲಿ ಹೆಸರಿದ್ದು, ಇದುವರೆಗೂ ಈ ಅವಕಾಶದಿಂದ ವಂಚಿತರಾಗಿರುವ ಕನ್ನಡ ನಿಘಂಟು ಖ್ಯಾತಿಯ ಹಿರಿಯ ಸಾಹಿತಿ ೯೬ರ ಹರೆಯದ ಪ್ರೊ| ವೆಂಕಟಸುಬ್ಬಯ್ಯ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
ಇವರೊಂದಿಗೆ ಹಿರಿಯ ಸಂಶೋಧಕ ಪ್ರೊ| ಚಿದಾನಂದ ಮೂರ್ತಿ ಅವರ ಹೆಸರೂ ಇದೆ. ಆದರೆ, ಮತ್ತೆ ಕೆಲವು ಸಾಹಿತಿಗಳು ತಾವೇ ಅಧ್ಯಕ್ಷರಾಗಬೇಕೆಂದು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.
ಆದರೆ, ತಾವು ಯಾವುದೇ ಲಾಬಿಗೆ ಬಗ್ಗುವುದಿಲ್ಲ. ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿಯೇ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದು ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್ ಹೇಳುತ್ತಾರೆ.
ಈ ನಡುವೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿರುವ ಪ್ರಮುಖ ಹೆಸರುಗಳು- ೧. ಪ್ರೊ| ಜಿ. ವೆಂಕಟಸುಬ್ಬಯ್ಯ; ೨. ಪ್ರೊ| ಚಿದಾನಂದಮೂರ್ತಿ; ೩. ಹಂಪ ನಾಗರಾಜಯ್ಯ; ೪. ಸಿ.ಪಿ. ಕೃಷ್ಣಕುಮಾರ್; ೫. ಎಂ.ಎಂ. ಕಲ್ಬುರ್ಗಿ
ಒತ್ತಡ ತಂತ್ರ: ಕೆಲವು ಧೀಮಂತರೆನಿಸಿಕೊಂಡ ಸಾಹಿತಗಳೇ ಕೆಲವರ ಪರವಾಗಿ ಒತ್ತಡ ತರುತ್ತಾರೆ ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರೊಬ್ಬರ ಅಭಿಮತ. ಕಳೆದ ಬಾರಿಯೂ ಇದೇ ರೀತಿ ನಡೆದಿತ್ತು. ಆದರೆ ಕಸಾಪ ಅದಕ್ಕೆ ಕೇರ್ ಮಾಡಲ್ಲ ಎಂದು ತಿಳಿಸಿದರು. ಒಟ್ಟಿನಲ್ಲಿ ನವೆಂಬರ್‌ನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಯಾರಿ ಆರಂಭವಾಗಿರು ವಂತೆಯೇ ಕೆಲವು ಸೋಕಾಲ್ಡ್ ಸಾಹಿತಿಗಳು ಸಮ್ಮೇಳನಾಧ್ಯಕ್ಷರಾಗಲು ತಯಾರಿ ಆರಂಭಿಸಿದ್ದಾರೆ.
ಸಮ್ಮೇಳನಕ್ಕೆ ಸಿದ್ಧತೆ: ‘ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಸೌಲಭ್ಯವೂ ಇದೆ, ಹಾಗೆಯೇ ಸಮಸ್ಯೆಯೂ ಇದೆ’ ಎನ್ನುತ್ತಾರೆ ಸಾಹಿತ್ಯ ಪರಿಷತ್ತಿನ ದಂಡನಾಯಕ ನಲ್ಲೂರು ಪ್ರಸಾದ್. ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಬೇಕೆಂದು ಸವಾಲಿನ ತೀರ್ಮಾನ ಕೈಗೊಂಡಿದ್ದೇವೆ.
ಇದಕ್ಕಾಗಿ ಎಲ್ಲಾ ಹಂತದ ತಯಾರಿ ಆರಂಭವಾಗಿದೆ. ಸರ್ಕಾರ ಉತ್ತಮ ಸಹಕಾರ ಕೊಡುತ್ತಿದ್ದು, ಉತ್ತಮ ರೀತಿಯಲ್ಲಿ, ಲೋಪಗಳನ್ನು ಕಡಿಮೆ ಮಾಡಿ ಯಶಸ್ವಿಯಾಗಿ ಸಮ್ಮೇಳನ ನಡೆಸಲು ಉದ್ದೇಶಿ ಸಲಾಗಿದೆ ಎಂದರು. ಇಂಗ್ಲಿಷ್ ಹಾಗೂ ಅನ್ಯ ಭಾಷೆಯ ಪ್ರಭಾವ ಹೆಚ್ಚಿರುವ ಬೆಂಗಳೂರಿನಲ್ಲಿ ಸಮ್ಮೇಳನ ನಡೆಸುವುದು ಸವಾಲೇ ಸರಿ. ಈ ಸವಾಲನ್ನು ಸಾಧ್ಯ ಮಾಡುವುದು ಸಾಹಿತ್ಯ ಪರಿಷತ್ತಿನ ಗುಣ ಎಂದು ಹೆಮ್ಮೆಯಿಂದ ಅವರು ಹೇಳಿಕೊಳ್ಳುತ್ತಾರೆ.
ಸಮ್ಮೇಳನ ಮುಖ್ಯಾಂಶಗಳು
- ೪೦ ವರ್ಷದ ನಂತರ ಬೆಂಗಳೂರಲ್ಲಿ ಸಾಹಿತ್ಯ ಜಾತ್ರೆ
- ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ನಡೆಸಲು ತೀರ್ಮಾನ; ಪೂರ್ವ ಭಾವಿ ಸಭೆಗಳು ಆರಂಭ
- ಶೀಘ್ರವೇ ಕನ್ನಡಿಗ ಐಟಿಬಿಟಿ ತಜ್ಞರೊಂದಿಗೆ ಸಭೆ
- ಜನಪದಕ್ಕೆ ಒತ್ತುಕೊಡುವ ಕೃತಿಗಳಿಗೆ ಈ ಬಾರಿ ಪ್ರಾಧಾನ್ಯತೆ
- ಸಮ್ಮೇಳನದಲ್ಲಿ ಒಟ್ಟು ೭೭ ಕೃತಿ ಬಿಡುಗಡೆ; ಗಾಯನ ಸಮಾಜ, ಕುವೆಂಪು ಕಲಾಕ್ಷೇತ್ರ, ಜೈನ್ ಸಮುದಾಯ ಭವನ ಸಮಾನಾಂತರ ವೇದಿಕೆ
- ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಎಂಬುದೊಂದೇ ಮುಖ್ಯ ನಿರ್ಣಯ ಸಾಧ್ಯತೆ

ಸಾಹಿತ್ಯ ಸಮ್ಮೇಳನ; ಸಚಿವ-ಶಾಸಕರಿಂದ ವೇತನದ ದೇಣಿಗೆ

 
ಉದ್ಯಾನಗರಿಯಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವರು, ಶಾಸಕರು ಮತ್ತು ಸರಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ದೇಣಿಗೆ ರೂಪದಲ್ಲಿ ನೀಡಲು ನಿರ್ಧರಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾಗತ ಸಮಿತಿ ಮಹಾಧ್ಯಕ್ಷರಾಗಿ ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ್ ಅವರನ್ನು ನೇಮಕಗೊಳಿಸಲಾಗಿದ್ದು, ಇದೇ ಸಂದರ್ಭದಲ್ಲಿ ಹಲವು ನಿರ್ಣಯಗಳನ್ನು ಕೂಡ ಅಂಗೀಕರಿಸಲಾಯಿತು.

ಡಿಸೆಂಬರ್ ಕೊನೆಯ ವಾರದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿರುವ ಕನ್ನಡ ಜಾತ್ರೆಯ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರಗಳನ್ನು ಕೂಡ ಸರಕಾರ ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣದ ಉಸ್ತುವಾರಿ ಸಚಿವರೂ ಆಗಿರುವ ಅಶೋಕ್ ಭರವಸೆ ನೀಡಿದರು.

40 ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೂ ಮೊದಲು ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದಲ್ಲಿ 'ನುಡಿತೇರು' ಜಾಗೃತಿ ಜಾಥಾವನ್ನು ಕೂಡ ನಡೆಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರ್ ಪ್ರಸಾದ್ ತಿಳಿಸಿದರು.

ಮಂತ್ರಿ-ಮಾಗಧರಿಂದ ದೇಣಿಗೆ...
ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಮೇಯರ್, ಕಸಾಪ ಪದಾಧಿಕಾರಿಗಳು ತಮ್ಮ ವೇತನದಿಂದಲೇ ದೇಣಿಗೆಯನ್ನು ನೀಡುವ ಮಹತ್ವದ ನಿರ್ಣಯವನ್ನು ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಸಮ್ಮೇಳನ ವೈಭವದಿಂದ ನಡೆಯಬೇಕೆಂಬ ನಿಟ್ಟಿನಲ್ಲಿ ಶಾಸಕರು, ಮೇಯರ್, ಸಂಸದರು, ಎಂಎಲ್‌ಸಿಗಳು, ಸರಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ದೇಣಿಗೆಯನ್ನಾಗಿ ನೀಡಲಿದ್ದರೆ, ಸಚಿವರುಗಳು ತಮ್ಮ ಒಂದು ತಿಂಗಳ ವೇತನವನ್ನೇ ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ರೂಪದಲ್ಲಿ ಅರ್ಪಿಸಲಿದ್ದಾರೆ.

ಶೀಘ್ರದಲ್ಲೇ ಅಧ್ಯಕ್ಷರ ಆಯ್ಕೆ...
ಅಕ್ಟೋಬರ್ ತಿಂಗಳಾಂತ್ಯದಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಸಾಪ ಸಾಮಾನ್ಯ ಸಭೆಯಲ್ಲಿ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.

ಈ ಹಿಂದೆ ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆದಿರುವುದು 40 ವರ್ಷಗಳ (1970) ಹಿಂದೆ. ಕೋಟೆ ಹೈಸ್ಕೂಲ್ ಮೈದಾನದಲ್ಲಿ ನಡೆದಿದ್ದ ಸಮ್ಮೇಳನಕ್ಕೆ ದೇಜಗೌ ಅಧ್ಯಕ್ಷರಾಗಿದ್ದರು.

ಈ ಬಾರಿಯ ಸಮ್ಮೇಳನದ ಅಧ್ಯಕ್ಷ ಗಾದಿಗೆ ಪ್ರೊ. ವೆಂಕಟಸುಬ್ಬಯ್ಯ, ಪ್ರೊ. ಚಿದಾನಂದ ಮೂರ್ತಿ, ಹಂಪ ನಾಗರಾಜಯ್ಯ, ಸಿ.ಪಿ. ಕೃಷ್ಣಕುಮಾರ್, ಎಂ.ಎಂ. ಕಲ್ಬುರ್ಗಿ ಸೇರಿದಂತೆ ಹಲವರ ಹೆಸರುಗಳು ತೇಲುತ್ತಿವೆಯಾದರೂ, ಯಾರ ಹೆಸರೂ ಅಂತಿಮಗೊಂಡಿಲ್ಲ.

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

"ಎಲ್ಲಾದರೂ ಇರು, ಎಂತಾದರು ಇರು
ಎಂದೆಂದಿಗೂ ನೀ ಕನ್ನಡಿಗನಾಗಿರು"
ನೀ ಮೆಟ್ಟುವ ನೆಲ ಅದೇ ಕರ್ನಾಟಕ
ನೀ ಕುಡಿಯುವ ನೀರ್ ಕಾವೇರಿ"
ಜೈ ಕರ್ನಾಟಕ.... ಜೈ ಕನ್ನಡಾಂಬೆ.

ದಿನಾಂಕ:    ರವರೆಗೆ ನಡೆಯುವ

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ

ಶುಭಾಷಯ ಹಾಗೂ ಸ್ವಾಗತ ಕೋರುವವರು


ನಂದಿ ಜೆ. ಹೂವಿನಹೊಳೆ
ಜಯನಗರ,ಬೆಂಗಳೂರು ನಗರ
 Mobile: +91 9035177234
www.chitharadurga.com
(A first Kannada website of Chitradurga Dist)

ಸೋಮವಾರ, ಸೆಪ್ಟೆಂಬರ್ 27, 2010

ಲೇಖನ ಮತ್ತು ನಿರಂತರ ಸುದ್ದಿ ಗಳಿಗಾಗಿ ನಿರೀಕ್ಷಿಸಿ

ಲೇಖನ ಮತ್ತು ನಿರಂತರ ಸುದ್ದಿ ಗಳಿಗಾಗಿ ನಿರೀಕ್ಷಿಸಿ
ಇಂತಿ ನಿಮ್ಮ ಪ್ರೀತಿಯ ಗೆಳೆಯ
ನಂದಿ ಜೆ. ಹೂವಿನಹೊಳೆ

ಚಿತ್ತಾರದುರ್ಗ.ಕಾಂ,ಮತ್ತು ಐಟಿಕನ್ನಡಿಗಸ್.ಕಾಂ 

ಸಂಚಾಲಕ,ಅಧ್ಯಕ್ಷ
ಎನ್.ಎಸ್.ಯು.ಐ-ವಿಜಯ ಸಂಜೆ ಕಾಲೇಜ್ ಘಟಕ,

ಸದಸ್ಯ: ಕನ್ನಡ ಸಾಹಿತ್ಯ ಪರಿಷತ್,ಬೆಂಗಳೂರು
ದೂ:9035177234, E-MAIL: nimmanandi@gmail.com

BLOG: hoovinahole.blogspot.com, 

          ಮತ್ತು 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
http://77nesahityasammelana.blogspot.com
          www.spatikapuri.webs.com,
WEB:
www.chitharadurga.com
           www.ITKannadigas.com