ಶುಕ್ರವಾರ, ನವೆಂಬರ್ 12, 2010

ಮಕ್ಕಳಿಗೆ ಕನ್ನಡ ಕಲಿಸಿ: 77ನೇ ಅಖಿಲ ಭಾರತ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ|ಜಿ.ವೆಂಕಟಸುಬ್ಬಯ್ಯ ಅವರೊ೦ದಿಗೆ ನೇರ ಸ೦ದರ್ಶನ

ಸಂದರ್ಶನ: ಶ್ರೀಕಾಂತ್ ಭಟ್

ನನ್ನ ಅದೃಷ್ಟ ಚೆನ್ನಾಗಿದೆ. ಮನಸ್ಸಿಗೂ ಸಂತಸವಾಗಿದೆ. ಪದವಿಗಿಂತ ಇನ್ನೇನು ದೊಡ್ಡದಿದೆ. ಗೌರವ ನಾನು ನಿರೀಕ್ಷಿಸಿರಲಿಲ್ಲ...
ಇದು ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊಜಿ.ವೆಂಕಟಸುಬ್ಬಯ್ಯ ಅವರ ವಿನೀತ ಅಭಿಪ್ರಾಯ.
ಲಕ್ಷ್ಮೀನಾರಾಯಣ ಭಟ್ಟರ ಹೊಸ ಪುಸ್ತಕ ಓದುತ್ತಾ ಕುಳಿತಿದ್ದೆ. ಆಗ ದೂರವಾಣಿ ಕರೆಯಲ್ಲಿ ಯಾರೊ ಒಬ್ಬರು ನೀವು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದೀರಾ ಎಂದು ತಿಳಿಸಿದರು. ನನಗೆ ಆಶ್ಚರ್ಯವಾಯಿತು. ಇಂದು ಸಭೆ ನಡೆಯುತ್ತಿದೆ ಎಂದೂ ನನಗೆ ಗೊತ್ತಿರಲಿಲ್ಲ ಎಂದು ಜಿ.ವಿ. ತಿಳಿಸಿದರು.
ಕನ್ನಡದ ಬಗ್ಗೆ ಚಿಂತೆ ನಿಮ್ಮನ್ನು ಕಾಡಿದಿದ್ದೆಯೇ?

-ಸಮ್ಮೇಳನ ಅಧ್ಯಕ್ಷನಾದ ಸಂದರ್ಭದಲ್ಲಿ ಮತ್ತು ಬೆಂಗಳೂರಲ್ಲಿ ಸಮ್ಮೇಳನ ನಡೆಯುತ್ತಿರುವಾಗ ಯೋಚಿಸಬೇಕಾದ ಅನೇಕ ಸಂಗತಿಗಳು ಇವೆ. ಶೇ.೨೦ರಷ್ಟು ಮಾತ್ರ ಕನ್ನಡಿಗರು ಬೆಂಗಳೂರಿನಲ್ಲಿ ಇದ್ದಾರೆ ಎಂದು ಕಾಣುತ್ತಿದೆ. ಇದು ಕನ್ನಡಕ್ಕೆ ಅಪಾಯ. ಇದನ್ನು ಸರಿಪಡಿಸುವ ಮಾರ್ಗ ತೋರುವ ಕೆಲಸ ನನ್ನಿಂದಾಗಬೇಕು ಎಂದು ಅಪೇಕ್ಷಿಸುತ್ತೇನೆ. ಕೈಲಾದ ಪ್ರಯತ್ನವನ್ನೂ ಮಾಡುತ್ತೇನೆ.

ಬೆಂಗಳೂರು ಕನ್ನಡ ಹೋರಾಟದ ಬಗ್ಗೆ ಏನೆನ್ನುತ್ತೀರಾ?
-ಇಂದು ಪ್ರಚಾರಕ್ಕಾಗಿ ಕನ್ನಡ ಪರ ಹೋರಾಟಗಳು ನಡೆಯುತ್ತಿವೆ. ಆಂದೋಲನ ಮಾಡುವ ಹೆಸ ರಲ್ಲಿ ತಮ್ಮ ಛಾಯಾಚಿತ್ರವನ್ನು ರಸ್ತೆ ರಸ್ತೆಯಲ್ಲಿ ಪ್ರಚಾರ ಮಾಡುತ್ತಾರೆ. ಇದರ ಉದ್ದೇಶವೇನೋ ಅರ್ಥವಾಗದು. ಹಾಗೆಯೇ ಕಿರುಚಾಟ ನಡೆಸಿದರೆ ಕನ್ನಡ ಉಳಿಯದು ಎಂಬುದನ್ನು ಮುಖಂಡರು ಅರಿಯಬೇಕು.

ಕನ್ನಡ ಉಳಿಯಲು ನಿಮ್ಮ ಸಲಹೆ ಏನು?

-ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸಂಬಳ ಬರಬಹುದು, ಬರಲಿ.
ಆದರೆ ಅವರು ಕನ್ನಡ ಪ್ರೇಮ ಉಳಿಸಿಕೊಳ್ಳಬೇಕು. ದೇಶದಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಧಕ್ಕೆ ಬಾರದು, ವಿಚಾರದಲ್ಲಿ ಹೆದರಬೇಕಾಗಿಲ್ಲ. ಬೆಂಗಳೂರಿನಲ್ಲಿ ಮಾತ್ರ ಪರಭಾಷಿಗರು ತುಂಬಿ ಹೋಗಿದ್ದಾರೆ. ಅವರು ಕನ್ನಡ ಮಾತನಾಡಬೇಕು, ಕನ್ನಡಿಗರಾಗಬೇಕು ಎಂಬುದು ನನ್ನ ಆಶಯ. ಇದಕ್ಕಾಗಿ ಭಾಷೆ ಉಳಿಸಲು ಎರಡು ಉಪಾಯವನ್ನೂ ಹೇಳಿಕೊಡುವೆ.

ಶಿಕ್ಷಣ- ಉದ್ಯೋಗದಲ್ಲಿ ಕನ್ನಡದ ಪಾತ್ರ ಏನಾಗಬೇಕು?

ನಲಿಕಲಿ ಅಪಾಯ. ಪ್ರಾಥಮಿಕ ಶಿಕ್ಷಣದಲ್ಲಿ ವ್ಯವಸ್ಥೆ ಬದಲಿಸಬೇಕೆಂಬುದನ್ನು ನಾನು ಹೇಳುತ್ತೇ ನೆ. ಅಪಾಯಕಾರಿ ಶಿಕ್ಷಣ ಪದ್ದತಿಯನ್ನು ಕೈಬಿಡುವುದೇ ಸೂಕ್ತ ಎಂಬುದು ಭಾವನೆ. ಕನ್ನಡ ಮಾಧ್ಯಮ ಓದಿದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೊದಲ ಆದ್ಯತೆ ಎಂದು ಸರ್ಕಾರ ಘೋಷಿ ಸಿದರೆ ಆಗ ಕನ್ನಡಕ್ಕೆ ತನ್ನಿಂತಾನೆ ಮಾನ್ಯತೆ ದೊರೆಯುತ್ತದೆ. ಸರೋಜಿನಿ ಮಹಿಷಿ ವರದಿಯನ್ನು ತಕ್ಷಣವೇ ಜಾರಿಗೆ ತನ್ನಿ ಎಂಬುದೇ ನನ್ನ ಆಗ್ರಹ.

ಇಂಗ್ಲಿಷ್ ಬಗ್ಗೆ ನಿಮ್ಮ ಅಭಿಪ್ರಾಯ? ಕನ್ನಡ ಮನೆ ಹೇಗಾಗಬೇಕು?

ಇಂಗ್ಲಿಷ್ ವಿರೋಧಿಸಿ ಎಂದು ನಾನು ಹೇಳಲಾರೆ. ಆದರೆ ಇಂಗ್ಲಿಷ್, ಸ್ಪಾನಿಷ್, ಪೋರ್ಚುಗೀಸ್ ಭಾಷೆಗಳು ಕೊಲೆಕಡುಕ ಭಾಷೆಗಳು. ಇವುಗಳ ಪ್ರಭಾವ ಎಷ್ಟೆಂದರೆ ಇನ್ನೊಂದು ಭಾಷೆಯನ್ನು ಮುಳುಗಿಸುವಷ್ಟು ಶಕ್ತಿ ಇವೆ. ಬೆಂಗಳೂರಿನಲ್ಲಿರುವ ಎಲ್ಲಾ ಭಾಷಾ ಮಾಧ್ಯಮದ ಶಾಲೆಗಳಲ್ಲೂ ಒಂದರಿಂದ ೧೦ನೇ ತರಗತಿವರೆಗೆ ಪ್ರಥಮ ಭಾಷೆ ಕನ್ನಡ ಭಾಷೆ ಇರುವಂತೆ ನೋಡಿಕೊಳ್ಳಬೇಕು. ಆಗ ಕನ್ನಡತನ ಉಳಿಯಲು ಸಾಧ್ಯ. ವಯಸ್ಸಾದವರಿಗೆ ಕನ್ನಡ ಹೇಳಿಕೊಡುವ ಬದಲು ನಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಟ್ಟರೆ ಮನೆಗಳೆಲ್ಲಾ ಕನ್ನಡ ಮನೆಗಳಾಗುತ್ತವೆ.

ಪರಿಷತ್, ನಿಮ್ಮ ನಡುವಿನ ಸಂಬಂಧ?

ಪರಿಷತ್ ಸಾಯುತ್ತಿದ್ದಾಗ ಬದುಕಿಸಿದೆ. ಅಧ್ಯಕ್ಷನಾಗಿ ಬಂದಾಗ ಅಲ್ಲಿನ ಸಿಬ್ಬಂದಿಗೆ ಸಂಬಳ ಕೊಡ ಲು ಕಷ್ಟವಾಗಿತ್ತು. ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರನ್ನು ಕೇಳಿಕೊಂಡೆ, ಹೆಗಡೆ ವರ್ಷಕ್ಕೆ ರು. ೨೫,೦೦೦ ಬರುವಂತೆ ಮಾಡಿ ಕಸಾಪ ಬದುಕಿಸಿದರು. ಕಸಾಪ ಎಣೆ ಇಲ್ಲದೇ ಬೆಳೆ ಯಬೇಕೆಂದು ಆಸೆ ಪಟ್ಟವನು ನಾನು. ಈಗ ಸಮಾಧಾನ ತಂದುಕೊಟ್ಟಿದೆ. ನಿಘಂಟು ಖುಷಿಕೊಟ್ಟ ಸಂಗತಿ.

ಮನೆ ಮತ್ತು ನಿಮ್ಮ ಕಾಯಕ ಹೇಗಿತ್ತು?

ಹೆಂಡತಿ ಮಾಡಿದ ಅಡುಗೆ ಉಪ್ಪುಕಾರದಿಂದ ಇಷ್ಟೆಲ್ಲಾ ಸಾಧ್ಯವಾಗಿದೆ ಎಂದು ಹೇಳುತ್ತೇನೆ. ಸಾಹಿತ್ಯ ಕ್ಷೇತ್ರಕ್ಕೆ ನನ್ನಿಂದೇನಾದರೂ ಕೊಡುಗೆ ಸಿಕ್ಕಿದೆ ಎಂದರೆ ಅದರಲ್ಲಿ ಇವಳದ್ದೂ ಪಾಲಿದೆ. ಮನೆಯನ್ನು ಈಕೆ ಅಚ್ಚುಕಟ್ಟಾಗಿ ನೋಡಿಕೊಳ್ಳದೇ ಇದ್ದರೆ ನನ್ನಿಂದ ಇಷ್ಟೆಲ್ಲಾ ಸಾಧ್ಯವಾಗುತ್ತಿರಲಿಲ್ಲ ಎನಿಸುತ್ತದೆ. ನನ್ನ ಕೆಲಸಕ್ಕೆ ಸಾಕಷ್ಟು ಸಹಕಾರ ನೀಡಿದ್ದಾಳೆ.

ಇಂದಿಗೂ ಪಾಠ ಒಪ್ಪಿಸುವ ಶಿಷ್ಯರು!

ವೆಂಕಟಸುಬ್ಬಯ್ಯ ಅವರಿಗೆ ಈಗ ೯೮ರ ಹರೆಯ. ಸಂದರ್ಭದಲ್ಲೂ ಅವರ ಹಳೆ ಶಿಷ್ಯರು ಗುರು ವಿಗೆ ಪಾಠವನ್ನೊಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಆಶ್ಚರ್ಯ ಸಂಗತಿಯನ್ನು ಹೊರಹಾಕಿದ್ದು ಜಿ.ವಿ. ಅವರೇ. ನನ್ನ ಶಿಷ್ಯರು ಈಗಲೂ ಮನೆಗೆ ಬರುತ್ತಾರೆ. ಅವರೆಲ್ಲಾ ಪ್ರೊಫೆಸರ್ಗಳು, ಉಪ ನ್ಯಾಸಕರು ಇತ್ಯಾದಿ ಉದ್ಯೋಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಮನೆಗೆ ಬಂದಾಗ ಎಲ್ಲರೂ ನನ್ನ ಪಾಠವನ್ನು ನೆನಪಿಸುತ್ತಾರೆ. ಆಗ ನಾನು ಅವರಿಗೆ ಹಾಗಾದರೆ ಪಾಠ ಒಪ್ಪಿಸಿ ಎಂದು ಹೇಳು ವೆ. ಶಿಷ್ಯರೆಲ್ಲ ೨೦-೨೫ ಪದ್ಯಗಳನ್ನು ತಂದು ಒಪ್ಪಿಸುವ ಪರಿಪಾಠ ಇಂದಿಗೂ ಇದೆ ಎಂದು ಜಿ.ವಿ. ವಿವರಿಸಿದರು.

ನಿದ್ದೆ ಬಾರದು: ಪ್ರತಿ ದಿನ ಕುಮಾರವ್ಯಾಸನ ಒಂದು ಸಂಧಿಯನ್ನಾದರೂ ಓದದಿದ್ದರೆ ನನಗೆ ನಿದ್ದೆಯೇ ಬಾರದು ಎಂದು ವೆಂಕಟಸುಬ್ಬಯ್ಯ ಹೇಳುತ್ತಾರೆ. ಪ್ರತಿ ದಿನ ಬೆಳಗ್ಗೆ ೯ರಿಂದ ಗಂಟೆ ಕಾಲ ಪತ್ರ ವ್ಯವಹಾರಕ್ಕೆ ಮೀಸಲಿಡುತ್ತೇನೆ. ಎಲ್ಲೆಡೆಯಿಂದ ಪತ್ರಗಳು ಬರುತ್ತವೆ. ಅವುಗಳಿಗೆ ಅಂದೇ ಉತ್ತರಿಸಿ ಕಳುಹಿಸಿಬಿಡುತ್ತೇನೆ. ಮಧ್ಯಾಹ್ನ ಗಂಟೆ ನಂತರ ಹೆಂಡತಿ ಜೊತೆ ಮಾತ ನಾಡಲು ಸಮಯ ಮೀಸಲಿಟ್ಟಿದ್ದೇನೆ. ಸಂಜೆ ೪ರಿಂದ ಗಂಟೆವರೆಗೆ ಹಳೇ ವಿದ್ಯಾರ್ಥಿಗಳು ಮತ್ತು ಅತಿಥಿಗಳಿಗೆ ಸಮಯ ಮೀಸಲಿಟ್ಟಿದ್ದೇನೆ ಎಂದು ತಮ್ಮ ದಿನಚರಿಯನ್ನು ವಿವರಿಸಿದರು.

ಹಳೇ ನೆನಪು: ಶ್ರೀರಂಗಪಟ್ಟಣದ ಗಂಜಾಂನಲ್ಲಿ ನಮ್ಮ ಮನೆ ಇತ್ತು. ತಂದೆ ಜಿ.ತಿಮ್ಮಣ್ಣಯ್ಯ ಶಿಕ್ಷಕರಾಗಿದ್ದರು. ೧೦೭ ವರ್ಷ ಬದುಕಿದ್ದ ಅವರು ಕಾವ್ಯಗಳನ್ನು ರಚಿಸಿದ್ದಾರೆ ಎಂದು ತಮ್ಮ ಹಳೆಯ ನೆನಪನ್ನು ಬಿಚ್ಚಿಟ್ಟರು. ನಾನು ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದೆ. ಕಾವೇರಿಯ ಅಂಗಳ ದಲ್ಲೇ ಆಡಿ ಬೆಳೆದವನು ಎಂದರು ಜಿ.ವಿ.

ವಯಸ್ಸಾದವರಿಗೆ ಕನ್ನಡ ಹೇಳಿಕೊಡುವ ಬದಲು ನಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಟ್ಟರೆ ಮನೆಗಳೆಲ್ಲಾ ಕನ್ನಡ ಮನೆಗಳಾಗುತ್ತವೆ. -ಜಿ.ವೆಂಕಟಸುಬ್ಬಯ್ಯ

ಅವರು ಮಾಡಿದ ಕೆಲಸಕ್ಕೆ ಗೌರವ ಸಿಕ್ಕಿದೆ. ತುಂಬಾ ಖುಷಿಯಾಗುತ್ತಿದೆ. -ಲಕ್ಷ್ಮಿ, ಜಿ.ವಿ. ಪತ್ನಿ



ಸಮ್ಮೇಳನಕ್ಕೆ ಹಿರಿಯ ಜೀವಿ

ಬೆಂಗಳೂರು .ಭಾ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾನುಮತದ ಆಯ್ಕೆ
ಬೆಂಗಳೂರು: ಕನ್ನಡದನಿಘಂಟು ಬ್ರಹ್ಮ’, ‘ನಡೆದಾಡುವ ಜ್ಞಾನ ಭಂಡಾರಆಗಿರುವ ೯೮ರ ಹರೆಯದ ಪ್ರೊಜಿ.ವೆಂಕಟಸುಬ್ಬಯ್ಯ ಅವರು ಬೆಂಗಳೂರಿನಲ್ಲಿ ನಡೆಯುವ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುನ್ನಡೆಸಲಿದ್ದಾರೆ.

ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಡೆದ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಮ್ಮತದಿಂದ ಜಿ.ವಿ. ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಪ್ರೊಚಿದಾನಂದಮೂರ್ತಿ, ಹಂ..ನಾಗರಾಜಯ್ಯ, ಸಿ.ಪಿ.ಕೃಷ್ಣಕುಮಾರ್, ಎಂ.ಎಂ.ಕಲ್ಬುರ್ಗಿ, ಸಾ.ರಾ. ಅಬೂಬಕರ್ ಅವರ ಹೆಸರುಗಳು ಸಭೆಯಲ್ಲಿ ಚರ್ಚೆಗೆ ಬಂದಿದ್ದವು. ಆದರೆ ಸರ್ವಾನು ಮತದಿಂದ ಜಿವಿ ಅವರನ್ನು ಎಲ್ಲರೂ ಒಪ್ಪಿದ ಕಾರಣ ಅವರೇ ಸಮ್ಮೇಳನ ಅಧ್ಯಕ್ಷರೆಂದು ಘೋಷಿ ಸಲಾಯಿತು ಎಂದು ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್ ತಿಳಿಸಿದರು.

ವೆಂಕಟಸುಬ್ಬಯ್ಯ ಅವರು ಸಾಹಿತ್ಯ ಲೋಕ ಧೀಮಂತ ವ್ಯಕ್ತಿ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಪರಿಷತ್ತಿನ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಅವರ ಆಯ್ಕೆ ಅರ್ಥಪೂರ್ಣ ಎಂಬುದು ನಮ್ಮೆಲ್ಲರ ಭಾವನೆ ಎಂದು ಹೇಳಿದರು.

ಪೂರ್ವ ತಯಾರಿ: ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ ೨೪ರಿಂದ ನಡೆಯುವ ಸಮ್ಮೇಳನಕ್ಕೆ ಪೂರ್ವ ತಯಾರಿ ನಡೆದಿದೆ. ಚಿತ್ರದುರ್ಗ ಸಮ್ಮೇಳನದಲ್ಲಾದ ಲೋಪ ದೋಷಗಳ ಬಗ್ಗೆ ಇಲ್ಲಿನ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದಿದ್ದು, ಇಲ್ಲಿ ರೀತಿಯ ತಪ್ಪು ಮರು ಕಳಿಸದಂತೆ ನೋಡಿಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ನಲ್ಲೂರು ತಿಳಿಸಿದರು.

ಸಂಪನ್ಮೂಲಕ್ಕೆ ಕೊರತೆ ಇಲ್ಲ: ಸಮ್ಮೇಳನಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಇಲ್ಲ.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರ್.ಅಶೋಕ, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಸರ್ಕಾರ ಈಗಾಗಲೇ ರು. ಕೋಟಿ ಬಿಡುಗಡೆ ಮಾಡಿದೆ. ಮೇಯರ್ ಸಹ ರು. ಕೋಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾ ರಿ ನೌಕರರ ಒಂದು ದಿನದ ಸಂಬಳ, ಶಾಸಕರ ಒಂದು ತಿಂಗಳ ವೇತನ ಸೇರಿದಂತೆ ಎಲ್ಲಾ ರೀತಿಯಲ್ಲಿ ಅಗತ್ಯ ಹಣ ಸಂಗ್ರಹವಾಗಲಿದೆ ಎಂಬ ವಿಶ್ವಾಸವಿದೆ ಎಂದರು.

ಬ್ಯಾಗು, ಬ್ಯಾಡ್ಜ್ ಕಿತ್ತಾಟವಿಲ್ಲ: ಪ್ರತಿ ಸಮ್ಮೇಳನದಲ್ಲಿ ಬ್ಯಾಗು, ಬ್ಯಾಡ್ಜ್ಗೆ ಕಿತ್ತಾಟ ನಡೆಯುತ್ತದೆ. ಆದರೆ ಸಮ್ಮೇಳನದಲ್ಲಿ ಯಾವುದೇ ಬ್ಯಾಗನ್ನು ಪ್ರತಿನಿಧಿಗಳಿಗೆ ಕೊಡುವುದಿಲ್ಲ ಎಂದು ನಲ್ಲೂರು ಪ್ರಸಾದ್ ಸ್ಪಷ್ಟಪಡಿಸಿದರು. ಪ್ರತಿನಿಧಿ ಶುಲ್ಕ ರು. ೨೫೦ಕ್ಕೆ ನಿಗದಿಪಡಿಸಲಾಗಿದೆ ಎಂದು ಹೇಳಿದ ರಲ್ಲದೇ, ೫೦೦ ಪುಟಗಳಬೆಂಗಳೂರು ಬಾಗಿನಸ್ಮರಣ ಸಂಚಿಕೆ ಹೊರತರುತ್ತಿರುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಸಾಪ ನಗರ ಜಿಲ್ಲಾಧ್ಯಕ್ಷ ರಾಮೇಗೌಡ ಮತ್ತಿತರರು ಇದ್ದರು.

ಜೀವಿ ೯೮ರ ವಯೋವೃದ್ಧ

ಸಮ್ಮೇಳನ ಡಿ. ೨೪, ೨೫ ಮತ್ತು ೨೬

ಸ್ಥಳ: ನ್ಯಾಷನಲ್ ಕಾಲೇಜು ಮೈದಾನ

ಮೂರು ಸಮಾನಾಂತರ ವೇದಿಕೆ

ಪ್ರತಿ ದಿನ ಸಂಜೆ ಸಾಂಸ್ಕೃತಿ ಕಾರ್ಯಕ್ರಮ

ಪ್ರತಿನಿಧಿಗಳು: ಅಂದಾಜು ೨೦,೦೦೦

ಬಾರಿ ಕಿಟ್ ಇಲ್ಲ, ಊಟ ಸರಳ

ಬೆಂಗಳೂರು ಬಗ್ಗೆ ವಿಶೇಷ ಗೋಷ್ಠಿ

೫೦೦ ಪುಟದ ಬೆಂಗಳೂರು ಬಾಗಿನ ಸ್ಮರಣ ಸಂಚಿಕೆ

ಸಮ್ಮೇಳನಕ್ಕೆಂದೇ ಆಕರ ಗ್ರಂಥಗಳ ಸಿದ್ಧತೆ

ವಾಮನಮೂರ್ತಿ ಕೋಟಿ ಪದಗಳ ಕೋಶ

ವೆಂಕಟಸುಬ್ಬಯ್ಯ ಅವರು ನೋಡಲುವಾಮನ ರೂಪವಾದರೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅತಿ ಎತ್ತರದ್ದು. ೧೯೧೩ರಲ್ಲಿ ಮೈಸೂರಿನಲ್ಲಿ ಜನಿಸಿದ ವೆಂಕಟಸುಬ್ಬಯ್ಯ ಅವರ ಮೂಲ ಊರು ಶ್ರೀರಂಗಪಟ್ಟಣ. ೧೯೩೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ. ಪದವಿ ಪಡೆದು ಪ್ರಥಮ ಸ್ಥಾನಕ್ಕಾಗಿ ಸುವರ್ಣ ಪದಕವನ್ನೂ ಪಡೆದಿದ್ದರು. ನಂತರ ಬಿ.ಟಿ ಪದವಿ. ೧೯೩೯ ರಿಂದ ವೃತ್ತಿ ಆರಂಭಿಸಿ, ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಅನನ್ಯ ಸೇವೆ ಸಲ್ಲಿಸಿದರು.

ಮುಂದೆ ನಿವೃತ್ತಿಯ ನಂತರ ಬೋಧನಾ ಮಾರ್ಗಗಳ ವಿಶೇಷ ಪ್ರಾಧ್ಯಾಪಕರೆನಿಸಿಕೊಂಡರು. ಜೊತೆಯಲ್ಲೇ ಸಂಶೋಧನೆ, ಅನುವಾದ, ವಿಮರ್ಶೆ, ಗ್ರಂಥ ಸಂಪಾದನೆ, ನಿಘಂಟು ರಚನೆ ಇತ್ಯಾದಿ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಕನ್ನಡ ಭಾಷೆಯನ್ನು ಸಮೃದ್ಧಿಗೊಳಿಸುವ ನಿರಂತರ ಕಾಯಕದಲ್ಲಿ ತೊಡಗಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಇವರಿಗೆ ಸಂದಿವೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಹಲವು ಸಂಶೋಧನ ಮತ್ತು ವಿಮರ್ಶಾ ಲೇಖನಗಳಲ್ಲದೇ ಸುಮಾರು ೫೪ ಕೃತಿಗಳ ರಚನೆ ಅಥವಾ ಸಂಪಾದನೆ ಮಾಡಿದ್ದಾರೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಇವರ ಕನ್ನಡ ನಿಘಂಟು ಕನ್ನಡದಲ್ಲಿಯೇ ಪ್ರಥಮ, ವಿಶಿಷ್ಟ, ವಿನೂತನ.

ಕಸಾಪಗಿಂತ ಜೀವಿ ಹಿರಿಯರು!

ಬೆಂಗಳೂರು: ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿ ರುವ ಪ್ರೊಜಿ.ವೆಂಕಟಸುಬ್ಬಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ಗಿಂತ ಹಿರಿಯರು ಎಂಬ ಅಚ್ಚರಿಯ ಸಂಗತಿಯೊಂದಿದೆ. ಜಿವಿ ಹುಟ್ಟಿದ್ದು ೧೯೧೩ ಆಗಸ್ಟ್ ೨೩ರಂದು. ಕನ್ನಡ ಸಾಹಿತ್ಯ ಪರಿಷತ್ ಜನ್ಮತಾಳಿದ್ದು ೧೯೧೫ ಮೇ ೫ಕ್ಕೆ. ಕನ್ನಡ ಭಾಷೆಯಲ್ಲಿ ಗ್ರಂಥಗಳನ್ನು ರಚಿಸುವವರನ್ನು ಪ್ರೋತ್ಸಾಹಿಸುವುದಕ್ಕಾಗಿ ಸ್ವತಂತ್ರ ಅಧಿಕಾರವುಳ್ಳ ಸಂಸ್ಥೆಯೊಂದರ ಅಗತ್ಯತೆಯನ್ನು ಅರಿತ ಮೈಸೂರು ಸಂಸ್ಥಾನ ಕಸಾಪವನ್ನು ಹುಟ್ಟಿಹಾಕಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿಷತ್ ಅನ್ನು ಉದ್ಘಾಟಿಸಿದ್ದರು. ಇದೀಗ ಸುಮಾರು .೨೦ ಲಕ್ಷ ಪ್ರತಿನಿಧಿಗಳನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕೋಟಿ ಕನ್ನಡಿಗರ ಪ್ರಾತಿ ನಿಧಿಕ ಸಂಸ್ಥೆಯಾಗಿ ಬೆಳೆದು ನಿಂತಿದೆ. ಹಾಗೆಯೇ ಪರಿಷತ್ ನಡೆಸಿಕೊಂಡು ಬರುತ್ತಿರುವ ಸಾಹಿತ್ಯ ಸಮ್ಮೇಳನದ ೭೭ನೇ ಅಧ್ಯಕ್ಷರಾಗಿ ಜಿ.ವಿ. ಆಯ್ಕೆಯಾಗಿದ್ದಾರೆ.

ಕೃತಿಗಳು

ಇಗೋ ಕನ್ನಡ-

ಇಗೋ ಕನ್ನಡ-

ಮುದ್ದಣ ಪದ ಪ್ರಯೋಗ ಕೋಶ

ಎರವಲು ಪದ ಕೋಶ

ಕನ್ನಡ-ಕನ್ನಡ ಸಂಕ್ಷಿಪ್ತ ನಿಘಂಟು

ಕನ್ನಡ-ಕನ್ನಡ ಇಂಗ್ಲಿಷ್ ನಿಘಂಟು(ಇತರರೊಡನೆ)

ವ್ಯಕ್ತಿ ವಿಷಯ

ಕನ್ನಡವನ್ನು ಉಳಿಸಿ ಬೆಳೆಸಿದವರು

ಪ್ರೊ.ಟಿ.ಎಸ್. ವೆಂಕಣ್ಣನವರು

ಡಿ.ವಿ.ಗುಂಡಪ್ಪನವರು

ಕವಿ ಜನ್ನ

ಕನ್ನಡದ ನಾಯಕ ಮಣಿಗಳು

ವಿಮರ್ಶೆ, ಸಾಹಿತ್ಯ ಚರಿತ್ರೆ

ನಯಸೇನ

ಅನುಕಲ್ಪನೆ

ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ

ಸಂಪಾದನೆ

ಅಕ್ರೂರ ಚರಿತ್ರೆಯ ಸಂಗ್ರಹ

ಕರ್ಣ ಕರ್ಣಾಮೃತ

ನಾಗರಸನ ಭಗವದ್ಗೀತೆ

ಮುದ್ದಣ ಭಂಡಾರ ಭಾಗ-

ಮುದ್ದಣ ಭಂಡಾರ ಭಾಗ-

ತಮಿಳು ಕಥೆಗಳು(ಇತರರೊಡನೆ)