- ಉದಯವಾಣಿ | ಜನ್ ೨೭ , ೨೦೧೧
ಬೆಂಗಳೂರು : ರಾಜಧಾನಿಯಲ್ಲಿ ನಡೆಯಲಿರುವ 77ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಭಾಗ್ಯ ಪಡೆದಿರುವ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಕಸಾಪ ಪದಾಧಿಕಾರಿಗಳು ಅಧಿಕೃತ ಆಮಂತ್ರಣ ನೀಡಿದರು.
ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಗೃಹ ಸಚಿವ ಆರ್. ಅಶೋಕ್, ಕಸಾಪ ರಾಜ್ಯಾಧ್ಯಕ್ಷ ನಲ್ಲೂರು ಪ್ರಸಾದ್ ನಿಯೋಗವು ಜಿ.ವಿ. ಅವರನ್ನು ಭೇಟಿ ಮಾಡಿ, ಫೆಬ್ರವರಿ 4-5-6ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಸಮ್ಮೇಳನವನ್ನು ಚಂದಗಾಣಿಸಿಕೊಡುವಂತೆ ಆಮಂತ್ರಿಸಿದರು. ಸಾಂಪ್ರದಾಯಿಕವಾಗಿ ಫಲಫುಷ್ಪ, ಅಧಿಕೃತ ಆಮಂತ್ರಣ ಪತ್ರಿಕೆಯನ್ನು ಅವರಿಗೆ ನೀಡಿದರು.
ಸ್ವಾಗತ ಸಮಿತಿಯ ಸಂಘಟನಾ ಸಂಚಾಲಕ ಅಶ್ವತ್ಥನಾರಾಯಣ, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ. ರಾಮೇಗೌಡ, ನಗರ ಜಿಲ್ಲಾಧಿಕಾರಿ ಎಂ.ಕೆ. ಅಯ್ಯಪ್ಪ ಮೊದಲಾದವರಿದ್ದರು.
Güllac – Original Osmanisches Dessert – Türkisches Milchdessert mit
Rosenwasser - Rezept Von Einsendungen merosh
-
Güllac – Original Osmanisches Dessert – Türkisches Milchdessert mit
Rosenwasser - Rezept von meroshHier ist es Güllac – Original Osmanisches
Dessert – Türk...
2 ವರ್ಷಗಳ ಹಿಂದೆ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ